Monday 11 June 2018

ಚುಟುಕು ಕವನಗಳು


1)
ಹಗಲು ರಾತ್ರಿಗಳು ಓಡುತಿರಲು
ಸುಖ-ದುಃಖಗಳು ಸಾಗುತಿರಲು
ಕಾಲ ಚಕ್ರವು ತಿರುಗುತಿರಲು..
ಬದಲಾವಣೆ ಪ್ರಕೃತಿಯ ನಿಯಮವಣ್ಣ
ಅದುವೇ ಜಗದ ಸೂತ್ರವಣ್ಣ
ಅದನರಿತು ನೀವೆಲ್ಲರೂ ಬಾಳಿರಣ್ಣ
ನಿಮ್ಮ ಬದುಕು ಬಂಗಾರವಾಗಲಣ್ಣ



2)
ಬೇಡ ಎಂಬುದು ಬೇಕು
ಬೇಕು ಎಂಬುದು ಬಯಕೆ
ಪರಿಣಾಮ ಅಶಾಂತಿ ಮನಕೆ|
ಇನ್ನೆಷ್ಟು ದಿನ ಇದರ ಕೇಕೆ?
ಇನ್ನಾದರೂ ತುಂಬಲಿ ಸಂತೋಷ ಮಡಿಕೆ
ಹಾರಾಡಲಿ ಜೀವನ ಸಮೃದ್ಧಿಯ ಪತಾಕೆ...


                                       :- ಕೃತಿ

Wednesday 6 June 2018

ಪ್ರಥಮ ಯೋಜನೆ: ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ (LPS Kempasagara)


ಪ್ರಥಮ ಯೋಜನೆ:ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ
ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುವ ಈ ಶಾಲೆ ತಾಲ್ಲೋಕಿಗೆ ಒಂದು ಮಾದರಿ ಶಾಲೆ. ಇಲ್ಲಿನ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರ ಶ್ರಮದಿಂದ ಶಾಲೆ ಹಸಿರಿನಿಂದ ಸಿಂಗರಿಸಿದ್ದು ಮಕ್ಕಳು ಜ್ಞಾನ ಲೋಕದಲ್ಲಿ ನೂರಾರು ಹೊಸ ಕನಸುಗಳೊಂದಿಗೆ ಕಂಗೊಳಿಸುತ್ತಿವೆ.
ಪ್ರಸ್ತುತ ಗ್ರಾಮದಲ್ಲಿ ಆಂಗ್ಲ ಶಾಲೆಗಳ ವ್ಯಾಮೋಹ ಜಾಸ್ತಿಯಾಗಿದ್ದು ದುಡಿದ ಬಹುಪಾಲನ್ನು ಪೋಷಕರು ಕಾನ್ವೆಂಟ್ ಶಾಲೆಗಳಿಗೆ ಸುರಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು, ಸರ್ಕಾರೀ ಆಯೋಜಿತ ಶಿಕ್ಷಣದ ಜೊತೆಗೆ -ಇಲ್ಲಿನ ಹಳೇ ವಿದ್ಯಾರ್ಥಿಗಳು, ಇತರೆ ಸ್ನೇಹ ಸಹಾಯ ಹಸ್ತಗಳು ಸೇರಿದರೆ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

ಈ ನಿಟ್ಟಿನಲ್ಲಿ ಸಹಾಯಲೋಕ-Helping hands ನಿಂದ
 ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ , ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ...
Please share your ideas to mail id: krishnakempasagara@gmail.com








ಸಹಾಯಲೋಕ-Helping Hands


ಪೀಠಿಕೆ (Introduction):
ಬನ್ನಿ ಕೈಜೋಡಿಸಿ: ಗ್ರಾಮೀಣ ಸರ್ಕಾರಿ ಶಾಲೆಗಳ ಮತ್ತು ಅಲ್ಲಿನ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ.
(Come, Lets join your hands for Rural school and Rural children overall developments)

) ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಕೊಡುಗೆ (Help to improve basic necessities of rural government schools)
) ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ , ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ..
(Will go to school on Saturday and help students for English learning, Science experiments, Cultural activities, sports etc. so that we can support teachers for overall children development)
) ಬಡ ಮಕ್ಕಳ ಶಿಕ್ಷಣ -ಯೋಗ ಕ್ಷೇಮಕ್ಕೆ ನೆರವಾಗೋಣ (We can support Rural poor children for their education and welfare)

ದೀಪದಿಂದ ದೀಪವ ಹಚ್ಚು ನೀನು ಮಾನವ: ಕೈಲಾದ ಮಟ್ಟಿಗೆ ಸೇವೆ ಮಾಡೋಣ: ನಾವು ಬದುಕೋಣ ಜೊತೆಗೆ ಇತರರಿಗೂ ಬದುಕಲು ನೆರವಾಗೋಣ...
(Instead of commenting on problems...lets take some initiative and start helping for those who really need)

Sunday 3 June 2018

ಅಮರ ಸ್ನೇಹ: ಬಿಡಿಸಲಾರದ ಬಾಂಧವ್ಯ



ಆಕಾಶ ಭೂಮಿ ದೂರವೇ ಇದ್ದರೂ
ಅವುಗಳ ಸಂಬಂಧಗಳಿಗೆ ಮಿತಿಯುಂಟೇನಯ್ಯ..
ಮೋಡ- ಜಲಚಕ್ರ ಮಳೆ -ನೀರಾವಿ
ಬೆಳೆ- ಸಮೃದ್ಧಿ ತಾಪ- ಹವಾಮಾನ ..
ಹೀಗೆ ನೂರೆಂಟು ಬಂಧಗಳಿವೆ ಕಾಣಯ್ಯ!

ಮಾನವ ಸಂಬಂಧಗಳು ಜೊತೆ ಇರದಿದ್ದೊಡೆ
ಅವುಗಳು ಮುಗಿದೇ ಹೋದವು ಎಂದೇಕೆನ್ನುವಿರಿ..
ಮನಸ್ಸು- ನೆನಪು ಮುಗುಳ್ನಗೆ- ನಿಟ್ಟುಸಿರು
ಕನಸು- ಅಭಿವೃದ್ಧಿ ಕೋಪ- ಬಹುಮಾನ
ಹೀಗೆ ನೂರೆಂಟು ಅನುಬಂಧಗಳಿವೆ ಕಾಣಿರಯ್ಯ..

ನಿರ್ಲಿಪ್ತ ನಿಸ್ವಾರ್ಥ ನಿರಹಂಕಾರ..ವಿಕಾಸ ಒಳಿತು ಶ್ರೇಯಸ್ಸಿನ ಸ್ನೇಹ ಬಂಧವು ಎಂದಿಗೂ ಅಮರವಯ್ಯ...
ಇದೇ ಅಮರ ಸ್ನೇಹ ಚೇತನದ ಗುಟ್ಟು ಕಾಣಯ್ಯ...
 :-ಕೃತಿ (ಕೃಷ್ಣ ತಿಲಕ್)

ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!

ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪ...