Monday 24 July 2023

ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!

ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪಮೆಯೇ ಏನು ನಿನ್ನ ಲೀಲೆ!? ಇಂದಿಗೂ ಪ್ರೇಮಿಗಳ ವಿಚಾರ ಬಂದಾಗ ನಿನ್ನ ಪ್ರೀತಿಗಾಗಿ ಸಿಗುವಿಕೆಗಾಗಿ 'ಚಾತಕ ಪಕ್ಷಿಯಂತೆ ಕಾಯುವೆ' ಎನ್ನುವ ಮಾತು ಪ್ರಚಲಿತ. ಕವಿ-ಪ್ರೇಮಿಗಳಿಗೆ ಪ್ರೀತಿ-ವಿರಹದ ಉತ್ಕಟತೆ ವ್ಯಕ್ತಪಡಿಸಲು ಕವಿಸಮಯವಾದರೆ, ವಿಜ್ಞಾನಿ-ರೈತರಿಗೆ ಮುಂಗಾರು ಮಳೆ ಮುನ್ಸೂಚನೆಯ ಶುಭಸೂಚಕವಾಗಿ ‘ಮಾರುತಗಳ ಮುಂಗಾಮಿ’ ಯಾಗಿವೆ.

ಚಾತಕ ಪಕ್ಷಿ  ಕೋಗಿಲೆ ಜಾತಿಗೆ ಸೇರಿದ ಹಕ್ಕಿ .ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಕಂಡುಬರುವ ಇವು ಚಾತಕ ಪಕ್ಷಿ, ಚೊಟ್ಟಿ ಕೋಗಿಲೆ, ಗಲಾಟೆ ಕೋಗಿಲೆ, ಶಾರಂಗ, ಮಾತಂಗ, ಮಾರುತಗಳ ಮುಂಗಾಮಿ, Pied cuckoo, Jacobin Cuckoo (Clamator jacobinus) ಎಂದು ನಾನಾ ಹೆಸರುಗಳಿಂದ ಕರೆಯಲ್ಪಡುತ್ತವೆ.

ಚಾತಕ ಪಕ್ಷಿಯು ಆಕಾಶದೆಡೆಗೆ ಬಾಯಿ ತೆಗೆದು ಮಳೆಯ ನೀರನ್ನು ಮಾತ್ರ ಕುಡಿಯುತ್ತದೆಂದು, ಇಲ್ಲವಾದಲ್ಲಿ ಎಷ್ಟೋ ದಿನಗಳವರೆಗೆ ನೀರು ಕುಡಿಯದೇ ಬದುಕುತ್ತದೆ ಎಂಬ ನಂಬಿಕೆ ಇದೆ. ಭಾರತ ದೇಶದಲ್ಲಿನ ಮುಂಗಾರು ಮಳೆಗೂ ಮತ್ತು ಈ ಪಕ್ಷಿಗೂ ಅವಿನಾಭಾವ ಸಂಭಂದವಿದೆ. 

ಮುಂಗಾರ ಮಳೆಯು ಬರುವ ಸುಮಾರು ಒಂದು ವಾರದ ಮುಂಚೆ  ಹಲಾವಾರು ಸಂಖ್ಯೆಯಲ್ಲಿ ಚಾತಕ ಪಕ್ಷಿಗಳು ಕಂಡುಬರುತ್ತವೆ. ಇವುಗಳು ನಮ್ಮ ದೇಶದಲ್ಲೂ ಅನೇಕ ಭಾಗಗಳಲ್ಲಿ ಕಾಣಿಸಿಕೊಂಡು ಪೀವ್ ಪಿಯು ಪಿಯು… ಪೀವ್ ಪಿಯು ಪಿಯು… ಪೀವ್ ಪಿಯು ಪಿಯು… ಎಂದು ಜೋರಾಗಿ ಲೋಹದ ಕಂಠದಲ್ಲಿ ಇಂಪಾಾಗಿ ಹಾಡಲಾರಂಭಿಸಿದರಂತೂ ಮುಂಗಾರು ಶುರುವಾಯಿತು, ಖಂಡಿತ ಮಳೆಯಾಗುತ್ತದೆ. ಮಳೆರಾಯನಿಗೂ ಜಾತಕ ಪಕ್ಷಿಗಳಿಗೂ ನಂಟು ಉಂಟು, ಇವುಗಳು ಮಳೆ ನೀರನ್ನು ಬಿಟ್ಟು ಬೇರೆ ಯಾವುದೇ ಮೂಲದ ನೀರನ್ನು ಕುಡಿಯುವುದಿಲ್ಲ ಎಂಬುದು ರೈತಾಪಿ ಜನರ ಕವಿವರ್ಯರ ಪೂರ್ಣ ನಂಬಿಕೆ. 

ಇಷ್ಟೊಂದು ಪ್ರಖ್ಯಾತಿ ಪಡೆದಿರುವ ಜಾತಕ ಪಕ್ಷಿಗಳು ಅನೇಕ ಊಹಾಪೋಹ ಕಥೆಗಳನ್ನು ಹೊಂದಿದ್ದು, ವಾಸ್ತವವಾಗಿ ಹವಾಮಾನ ಬದಲಾವಣೆಗೆ ತಕ್ಕಂತೆ ಸ್ಪಂದಿಸುವುದರಿಂದ ಜನರ ಗಮನ ಸೆಳೆದಿವೆ ಎನ್ನಬಹುದು. ಅಂದರೆ ಆಫ್ರಿಕಾದಿಂದ ಮುಂಗಾರು ಮಾರುತಗಳ ಸಹಾಯ ಪಡೆದು ಸಮುದ್ರದ ಮೂಲಕವಾಗಿ ವಲಸೆ ಬಂದು ಇಲ್ಲಿ ಇರುವ ತನಕ ಸಂತಾನೋತ್ಪತ್ತಿ ಹೆಚ್ಚಿಸಿಕೊಂಡು ಚಳಿಗಾಲದ ಸಮಯಕ್ಕೆ ಉತ್ತರ ಭಾರತದ ಮೂಲಕ ಆಫ್ರಿಕಾದ ಕಡೆಗೆ ವಲಸೆ ಹೋಗುತ್ತವೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ.

ಒಟ್ಟಿನಲ್ಲಿ ಸತ್ಯ ಮಿಥ್ಯಗಳು ಏನೇ ಇದ್ದರೂ ಜಾತಕ ಪಕ್ಷಿಗಳು ಶುಭ ಸೂಚಕಗಳಾಗಿ ಗುರುತಿಸಿಕೊಂಡಿವೆ. ಮುಂಗಾರು ಮಳೆಗೆ ಅವುಗಳ ಕಾಯುವಿಕೆಯ ವಿಚಾರದಿಂದ ತಾಳುವಿಕೆಗಿಂತ ತಪವು ಇಲ್ಲ, ತಾಳಿದವನು ಬಾಳಿಯಾನು ಎಂಬ ಸಂದೇಶವನ್ನು ಮನುಕುಲದ ಜನಾಂಗಕ್ಕೆ ನೆನಪಿಸುತ್ತಾ ಬಂದಿವೆ.



Tuesday 17 May 2022

ಮಾತಿನ ಮಹತ್ವ: Importance of words/Speech

         ಮಾತು ಮನುಷ್ಯನಿಗೆ ದೊರೆತಿರುವ ಒಂದು ವರದಾನ. ಮಾತು ಎಂಬುದು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ಮಾತಿನಿಂ ನಗೆನುಡಿಯು ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹತಿಯು ಮಾತಿನಿಂ ಸರ್ಪಸಂಪದವು ಲೋಕಕ್ಕೆ ಮಾತೆ ಮಾಣಿಕ್ಯವುಎಂದು ಸರ್ವಜ್ಞ ಕವಿ ಸಾರಿದ್ದಾರೆ. 

        ಈ ಮಾತನ್ನು ಉಪಾಯವಾಗಿ ಕ್ರಮವರಿತು ಬಳಸಿದರೆ ದೊಡ್ಡ ಉಪಕಾರಿಯಾಗುತ್ತದೆ.ಅದನ್ನು ಬಿಟ್ಟು ಕ್ರಮತಪ್ಪಿ ಬಳಸಿದರೆ ಅದಕ್ಕಿಂತ ಅಪಾಯಕಾರಿ ಇನ್ನೊಂದಿಲ್ಲ. ಮಾತಿನಿಂದ ಎಂತಹ ಮಿತ್ರನೂ ಕೂಡ ಶತ್ರುವಾಗುತ್ತಾನೆ, ಶತ್ರು ಕೂಡ ಮಿತ್ರ ನಾಗುತ್ತಾನೆ. ದುಃಖಿತರಿಗೆ ಸಾಂತ್ವಾನವನ್ನು, ನಿರಾಶೆಯಲ್ಲಿರುವವರಿಗೆ ಭರವಸೆಯನ್ನು, ಒಂಟಿತನ, ಬದುಕಿನ ಜಂಜಾಟಗಳಿಗೆ ನವ ಜೀವವನ್ನು ಕೊಡುವ ದಿವ್ಯ ಶಕ್ತಿ ಮಾತಿಗಿದೆ.

"ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು? ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯ?" ಎಂದು ಬಸವಣ್ಣನವರು ಮಾತಿನ ಮಹತ್ವವನ್ನು ತಿಳಿಸಿದ್ದಾರೆ.

        ಆದ್ದರಿಂದ ನಮ್ಮ ಮಾತು ಸದಾ ಪರಿಶುದ್ಧವಾಗಿರಲಿ. ಸಮಾಜದ ಸ್ವಾಸ್ಥ್ಯ ಕಾಪಾಡುವಂತಿರಲಿ. ಸರ್ವರ ಸರ್ವೋದಯದ ಸಾಧನವಾಗಲಿ ಎಂದು ಆಶಿಸೋಣ.

ಮಾತಿನ ಮಹತ್ವವನ್ನು ತಿಳಿಸುವ ಗಾದೆ ಮಾತುಗಳು:

ü  ಮಾತು ಆಡಿದರೆ ಹೋಯಿತುಮುತ್ತು ಒಡೆದರೆ ಹೋಯಿತು.

ü  ನುಡಿದರೆ ಮುತ್ತಿನ ಹಾರದಂತಿರಬೇಕು

ü  ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ

ü  ಮಾತು ಬೆಳ್ಳಿಮೌನ ಬಂಗಾರ.

ü  ಮಾತು ಮನೆ ಕೆಡಿಸಿತುತೂತು  ಒಲೆ ಕೆಡಿಸಿತು.

ü  ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ü  ನುಡಿ ಜ್ಯೋತಿರ್ಲಿಂಗ

ü  ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ

ü  ಮೃದುವಚನ ಮೂಲೋಕ ಗೆಲ್ಲುವುದು ಗೆಳೆಯಾ

ü  ಮೃದುವಚನವೇ ಸಕಲ ಜಪಂಗಳಯ್ಯಾ

ü  ಮೃದುವಚನವೇ ಸಕಲ ತಪಂಗಳಯ್ಯಾ

ü  ರಸಿಕನಲ್ಲದವನ ಬರಿಮಾತು ಕೂರ್ದಸಿಯ ಬಡಿದಂತೆ

ü  ಮಾತು ಮಾತು ಮಥಿಸಿ ಬಂದ ನಾದದ ನವನೀತ

ü  ಮಾತೇ ಮುತ್ತುಮಾತೇ ಮೃತ್ಯು.

Power of words: ಮಾತಿನ ಕುರಿತ ಕೆಲವು ಆಂಗ್ಲ ನುಡಿಮುತ್ತುಗಳು:

v One kind word can change someone's entire day. –Unknown

v Be careful with your words. Once they are said, they can be only forgiven, not forgotten. -Unknown

v Words are free. It's how you use them that may cost you. –KushandWizdom

v Be mindful when it comes to your words. A string of some that don't mean much to you, may stick with someone else for a lifetime.-Rachel Wolchin

v Raise your words, not your voice. It is rain that grows flowers, not thunder. –Rumi

v Words have energy and power with the ability to help, to heal, to hinder, to hurt, to harm, to humiliate, and to humble. -Yehuda Berg

 

ಕನ್ನಡ ಕಲಿ-01

ಕನ್ನಡ ವರ್ಣಮಾಲೆಯಲ್ಲಿ ೪೯ (49 ) ಅಕ್ಷರಗಳಿವೆ.

Kannada varnamale is the list of Kannada alphabets or letters or words.  

Total 49 letters are there in Kannada language.

ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ.

ಕನ್ನಡ ವರ್ಣಮಾಲೆ:

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

 

Grammar: ವ್ಯಾಕರಣ:

ಸ್ವರಗಳು - 13

ಸ್ವರಗಳ ವಿಧ :

1. ಹ್ರಸ್ವ ಸ್ವರಗಳು - 6 (,ಇ ಉ,,,ಒ)

2. ದೀರ್ಘ ಸ್ವರಗಳು. - 7 (,,,ಏ.ಐ.ಓ,ಔ)

3. ಯೋಗವಾಹಗಳು - 2  {ಅಂ(ಅನುಸ್ವಾರ),  ಅಃ(ವಿಸರ್ಗ)}


ವ್ಯಂಜನಗಳು - 34

ವ್ಯಂಜನಗಳಲ್ಲಿ ಎರಡು ವಿಧ :

1. ವರ್ಗೀಯ ವ್ಯಂಜನಗಳು - 25

ಕ-ವರ್ಗ = ಕ, , , , ಙ.

ಚ-ವರ್ಗ = ಚ, , , , ಞ.

ಟ-ವರ್ಗ = ಟ, , , , ಣ.

ತ-ವರ್ಗ = ತ, , , , ನ.

ಪ-ವರ್ಗ= ಪ, , , , ಮ.

ಅಲ್ಪ ಪ್ರಾಣಗಳು: 

,,,,

,,,,

ಮಹಾಪ್ರಾಣಗಳು: 

,,,,

,,,,

ಅನುನಾಸಿಕಗಳು

 , , , ,


2. ಅವರ್ಗೀಯ ವ್ಯಂಜನಗಳು - 9

ಯ ರ ಲ ವ ಶ ಷ ಸ ಹ ಳ


Additional information:

ಸ್ವರಗಳು(Vowels):

ಅ -a, ಆ-aa, ಇ-i, ಈ-I, ಉ-u, ಊ-U, ಋ-Ru, ಎ-e, ಏ-E, ಐ-i, ಒ-o, ಓ-O, ಔ-ou, ಅಂ-am, ಅಃ-aHa.

ವರ್ಗೀಯ ವ್ಯಂಜನಗಳು (Grouped Consonants):

ಕ-ka, ಖ-Ka kha, ಗ-ga, ಘ-Ga gha, ಙ-~ga,

ಚ-ca, ಛ-Ca, ಜ-ja, ಝ-Ja jha, ಞ-~ja,

ಟ-Ta, ಠ-Tha, ಡ-Da, ಢ-Dha, ಣ-NA,

ತ-Ta, ಥ-Tha, ದ-Da, ಧ-Dha, ನ-Na,

ಪ-Pa, ಫ-PHA, ಬ-Ba, ಭ-BHA, ಮ-Ma,

ಅವರ್ಗೀಯ ವ್ಯಂಜನಗಳು (Miscellaneous Consonants):

ಯ-ya, ರ-ra, ಲ-la, ವ-wa va ಶ-sha, ಷ - Sha, ಸ-sa, ಹ-ha, ಳ-La

Saturday 4 April 2020

ಕುವೆಂಪು ನುಡಿ-ಕಿಡಿ-೧ (Kuvempu Quotes)


v ಜಾತಿ ಮತ ಬಿಡಿ, ಮಾನವತೆಗೆ ಜೀವ ಕೊಡಿ

v ಕಡಲಿನ ಎದುರು ಹನಿಗೆ ಪ್ರದರ್ಶನ ಸಲ್ಲದು.

v ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು.

v ತನ್ನ ತಾನ್ ಇಲ್ಲಗೈವುದು ಎಲ್ಲ ಸಾಧನೆಯ ಕೊನೆಯ ಗುರಿ

v ಸೃಷ್ಟಿ ಸೌಂದರ್ಯವನ್ನು ಪ್ರೀತಿಸುವುದೇ ಸೃಷ್ಟಿಕರ್ತನ ನಿಜವಾದ ಪೂಜೆ

v ಪಾಪಿಗುದ್ದಾರಮಿಹುದೌ ಸೃಷ್ಟಿಯ ಬ್ರುಹದ್ವಿಶ್ವವ್ಯೂಹದೊಳ್

v ಸುಂದರ ವನ ಸಂಸ್ಕೃತಿಯ ಮುಂದೆ ನಾಗರೀಕ ಸಂಸ್ಕೃತಿಯು ದಾರಿದ್ರ್ಯವೇ ದಿಟ.

v ಗಿರಿವನ ಪ್ರೇಮ ಸುಮ್ಮನೆ ಅಲ್ಲ, ಅದಕೂ ದೈವ ಕೃಪೆ ಬೇಕು

v ನಿನ್ನ ಸಂಸ್ಕೃತಿಗೆ ನೀನಾದರೆ ಅನ್ಯ, ಅದಾವ ಸಂಸ್ಕೃತಿಗೆ ನೀ ಮಾನ್ಯ?

v ಸೂರ್ಯೋದಯ ಅಸ್ತಮಾನಗಳಿಗೆ ಮೈಚೆಲ್ಲಿ ಪಾವನಗೊಳ್ವುವು ಗಿರಿಶಿಖರಂಗಳ್..

v ತೊರೆ ಅವಿದ್ಯೆಯಂ ಆಗೋ ಕಾಣ್ ಕಣ್ ತೆರೆದುದತೀಂದ್ರಿಯಕೆ..

**
ಕವಿಯಮನ ನಂದನವನ
ಆನಂದದ ರಸನಿಕೇತನ
ಅಲ್ಲಿ ಪಾಪವೂ ಪುಣ್ಯದ ವಾಹನ
ಅಲ್ಲಿ ದುಃಖವೂ ಸುಖದ ಜವಾನ
ಅಲ್ಲಿ ಸಾವೂ ಅಮೃತಾಯಾನ
 (:-ಮಂತ್ರಾಕ್ಷತೆ ಕವನ ಸಂಕಲನ)



:- ವಿಶ್ವಮಾನವ ವಿವೇಕಾನಂದ ಮತ್ತು ಕುವೆಂಪು ವಿಚಾರ ವೇದಿಕೆ.

ಒಲವು-ಚೆಲುವು (ಕಿರುಗವನಗಳು)

ಮುದ್ದು ಒಲವೆ, ಮನದ ಗೆಲುವೆ
ವರವಾಗಿ ನೀನು ಬರುವೆಯಾ!
ಒಲವ ಗೆದ್ದು ವಿಕಾಸ ಪಡೆದು
ಬದುಕ ಉಜ್ವಲಗೊಳಿಸೆಯಾ
ವಿರಹ ಅಳಿಸಿ ಸೊಗದಿ ನೆಲೆಸಿ
ಮೊಗದಿ ನಗುವ ತರುವೆಯಾ
ಸಾಕು ನೋವು, ಬೇಕು ಚೆಲುವು
ಮಯೂರಿಯಂತೆ ನಲಿವೆಯಾ...


ಬೃಂದಾವನದ ಏ ಚೆಲುವೆ..!
ಗೋಪಿಕಾ ಪ್ರೇಮದೊಲವೆ..!
ಮಾಧವನನೆ ಪ್ರೇಮ ಬಂಧನದಲಿರಿಸಿದೆ
ನಿಜ ಪ್ರೇಮದ ಅರ್ಥವ ಜಗಕೆ ಸಾರಿದೆ..
ಮನ-ಮನ ಪ್ರೀತಿಗೆ ಮಾದರಿ ಒಲವಾದೆ
ಜಗದಂತ್ಯದವರೆಗೊ ಅಮರ ತ್ಯಾಗಿಯಾದೆ!
ಮದುವೆಯ ಬಂಧ, ದೇಹ ಸಂಬಂಧ
ಮೀರಿದ ಮನಸುಗಳ ಮೀಲನಾನುಬಂಧ
ಆತ್ಮಗಳ ಐಕ್ಯತೆ ಸೊಗ ಪರಮಾನಂದ
ಕಲಿಯಲಿ ಕಲಿಯುಗ ನಿಮ್ಮ ಪ್ರೇಮದಿಂದ!

:-ಕೃತಿ

Friday 3 April 2020

ಅದೇನು ಪ್ರೇಮ!


ದ್ವಾಪರಯುಗದಲಿ ಕಾದಿದೆ ನೀನು!
ಕಲಿಯುಗದಲು ಕರೆಯುತಿಹೆ ಏನು?
ನಿನಗಲ್ಲದೆ ಇನ್ಯಾರಿಗೆ ಮುಕುಂದ
ನಿನ್ನೊಲವಲಿ ಪಡುವನು ಬಹು ಆನಂದ
ಬೇಸರ ಬೇಡ, ಬರುವನು ನೋಡ
ಪ್ರೆಮಧಾರೆಯನವನಿಗೆ ಹರಿಸಿ ನೀ ನೋಡ
ವಿಕಾಸದ ಒಲವು ದೇವರ ವರವು
ಪಸರಿಸಲಿ ಜಗಕೆ ಬಾಂಧವ್ಯ ಪರಿಮಳವು|
ಅಂದಿನ ಅಗಲಿಕೆ, ಅನುಭವಿಸಿದ ವಿರಹ
ಇಂದಿನ ಬೆಸುಗೆ, ಚೈತನ್ಯದ ಸ್ನೇಹಾ
ಏನೀ ಬಂಧನ ನಿಮ್ಮೀ ಪ್ರೇಮಾನುಬಂಧನ
ಸರ್ವಕಾಲಕು ನಿಮ್ಮ ಬದುಕೇ ಬೃಂದಾವನ
ನಿನ್ನನು ಪಡೆದ ಕೃಷ್ಣನೇ ಧನ್ಯ!
ಅವನ ಹೃದಯವ ಗೆದ್ದ ನೀನೇ ಮಾನ್ಯ!


:-ಕೃತಿ

ಪ್ರಕೃತಿ-ಚಿಂತನಾ

ಕೋವಿಡ್-೧೯ (Corona virus India lockdown ಸಮಯದಲ್ಲಿ ಗೀಚಿದ ಕವನ)

ಓ ಮನುಜಾ….
ಏನಾಗುತಿದೆ, ಏನಾಗಲಿದೆ
ಕೊಲ್ಲುತಿದೆ, ಕುಣಿದಾಡುತಿದೆ
ಕಾಣದ ಜೀವಿಯು ಬಂದು
ಮನುಕುಲವನ್ನೇ ಸೋಲಿಸಿದೆ||
ಓ ಮನುಜಾ….
ಇನ್ನಾದರೂ ಕಲಿ ನೀ ಬುದ್ದಿ
ಇಡು ನೀ ಪ್ರಕೃತಿಯಾ ಶುದ್ದಿ
ನಾನು, ನನಗಷ್ಟೇ ಎಂಬುದ ಬಿಡು
ಇಂದೂ ಬಳಸಿ, ಮುಂದಕು ಉಳಿಸು
ನಿನ್ನುಳಿವು ನಿನ್ನ ಕೈಲಿದೆ ನೋಡು..
ಓ ಮನುಜಾ….
ಧರೆ ಎಂಬುದು ನಿನ್ನದೊಬ್ಬನದಲ್ಲ
ಸಕಲಜೀವರಾಶಿಗದು ಬೇಕಲ್ಲ
ಇದರಲಸಮಾನತೆ ಯಾಕೆ ಮಾಡಿದೆ
ನಿನ್ನಯ ಸ್ವಾರ್ಥವೇ ನಿನ್ನನು ತಿಂದಿದೆ
ಕಲಿಯಬಾರದೆ ನೀ ಇದರಿಂದೆ....
ಓ ಮನುಜಾ….
ಚಿಂತಿಸಿ ನೋಡು,  ಮ೦ಥಿಸಿ ನೋಡು
ಮಾನವೀಯತೆಯ ಬದುಕಲಿ ಓಡು
ಸುಸ್ಥಿರ ವಿಕಾಸ ಜೀವನ ಪಾಡು
ಇದುವೇ ನಿನ್ನಯ ರಕ್ಷಣ ಮಂತ್ರ
ಅನ್ಯತಾ ಬೇರಿಲ್ಲಾ ತಂತ್ರ….
ಓ ಮನುಜಾ….

:-ಕೃತಿ

ಪುರಾತನದಿಂದ ವರ್ತಮಾನದವರೆಗೂ ಗಮನ ಸೆಳೆದಿರುವ ಚಾತಕ ಪಕ್ಷಿ - Jacobin Cuckoo!!

ಏನೆಂದು ಬಣ್ಣಿಸಲಿ ನಿನ್ನ ಮಹಿಮೆಯ ಓ ಚಾತಕ ಪಕ್ಷಿಯೇ!? ಪುರಾಣದಲಿ ಜಾನಪದದಲಿ ಕಾಳಿದಾಸ ತುಳಸೀದಾಸ ಕುವೆಂಪುರಾದಿಯಾಗಿ ಕವಿವರ್ಯರ ವಿರಹ ಕಾವ್ಯ ಸಾಲುಗಳಲಿ ಮೆರೆಯುತಿರುವ ಉಪ...