Friday 3 April 2020

ಅದೇನು ಪ್ರೇಮ!


ದ್ವಾಪರಯುಗದಲಿ ಕಾದಿದೆ ನೀನು!
ಕಲಿಯುಗದಲು ಕರೆಯುತಿಹೆ ಏನು?
ನಿನಗಲ್ಲದೆ ಇನ್ಯಾರಿಗೆ ಮುಕುಂದ
ನಿನ್ನೊಲವಲಿ ಪಡುವನು ಬಹು ಆನಂದ
ಬೇಸರ ಬೇಡ, ಬರುವನು ನೋಡ
ಪ್ರೆಮಧಾರೆಯನವನಿಗೆ ಹರಿಸಿ ನೀ ನೋಡ
ವಿಕಾಸದ ಒಲವು ದೇವರ ವರವು
ಪಸರಿಸಲಿ ಜಗಕೆ ಬಾಂಧವ್ಯ ಪರಿಮಳವು|
ಅಂದಿನ ಅಗಲಿಕೆ, ಅನುಭವಿಸಿದ ವಿರಹ
ಇಂದಿನ ಬೆಸುಗೆ, ಚೈತನ್ಯದ ಸ್ನೇಹಾ
ಏನೀ ಬಂಧನ ನಿಮ್ಮೀ ಪ್ರೇಮಾನುಬಂಧನ
ಸರ್ವಕಾಲಕು ನಿಮ್ಮ ಬದುಕೇ ಬೃಂದಾವನ
ನಿನ್ನನು ಪಡೆದ ಕೃಷ್ಣನೇ ಧನ್ಯ!
ಅವನ ಹೃದಯವ ಗೆದ್ದ ನೀನೇ ಮಾನ್ಯ!


:-ಕೃತಿ

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...