Saturday 4 April 2020

ಕುವೆಂಪು ನುಡಿ-ಕಿಡಿ-೧ (Kuvempu Quotes)


v ಜಾತಿ ಮತ ಬಿಡಿ, ಮಾನವತೆಗೆ ಜೀವ ಕೊಡಿ

v ಕಡಲಿನ ಎದುರು ಹನಿಗೆ ಪ್ರದರ್ಶನ ಸಲ್ಲದು.

v ಉತ್ಸಾಹವೆಂಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೆ ಹೊರತು ಹುಲ್ಲಿಗೆ ಹತ್ತಿದ ಬೆಂಕಿಯಾಗಬಾರದು.

v ತನ್ನ ತಾನ್ ಇಲ್ಲಗೈವುದು ಎಲ್ಲ ಸಾಧನೆಯ ಕೊನೆಯ ಗುರಿ

v ಸೃಷ್ಟಿ ಸೌಂದರ್ಯವನ್ನು ಪ್ರೀತಿಸುವುದೇ ಸೃಷ್ಟಿಕರ್ತನ ನಿಜವಾದ ಪೂಜೆ

v ಪಾಪಿಗುದ್ದಾರಮಿಹುದೌ ಸೃಷ್ಟಿಯ ಬ್ರುಹದ್ವಿಶ್ವವ್ಯೂಹದೊಳ್

v ಸುಂದರ ವನ ಸಂಸ್ಕೃತಿಯ ಮುಂದೆ ನಾಗರೀಕ ಸಂಸ್ಕೃತಿಯು ದಾರಿದ್ರ್ಯವೇ ದಿಟ.

v ಗಿರಿವನ ಪ್ರೇಮ ಸುಮ್ಮನೆ ಅಲ್ಲ, ಅದಕೂ ದೈವ ಕೃಪೆ ಬೇಕು

v ನಿನ್ನ ಸಂಸ್ಕೃತಿಗೆ ನೀನಾದರೆ ಅನ್ಯ, ಅದಾವ ಸಂಸ್ಕೃತಿಗೆ ನೀ ಮಾನ್ಯ?

v ಸೂರ್ಯೋದಯ ಅಸ್ತಮಾನಗಳಿಗೆ ಮೈಚೆಲ್ಲಿ ಪಾವನಗೊಳ್ವುವು ಗಿರಿಶಿಖರಂಗಳ್..

v ತೊರೆ ಅವಿದ್ಯೆಯಂ ಆಗೋ ಕಾಣ್ ಕಣ್ ತೆರೆದುದತೀಂದ್ರಿಯಕೆ..

**
ಕವಿಯಮನ ನಂದನವನ
ಆನಂದದ ರಸನಿಕೇತನ
ಅಲ್ಲಿ ಪಾಪವೂ ಪುಣ್ಯದ ವಾಹನ
ಅಲ್ಲಿ ದುಃಖವೂ ಸುಖದ ಜವಾನ
ಅಲ್ಲಿ ಸಾವೂ ಅಮೃತಾಯಾನ
 (:-ಮಂತ್ರಾಕ್ಷತೆ ಕವನ ಸಂಕಲನ)



:- ವಿಶ್ವಮಾನವ ವಿವೇಕಾನಂದ ಮತ್ತು ಕುವೆಂಪು ವಿಚಾರ ವೇದಿಕೆ.

No comments:

Post a Comment

ಕುವೆಂಪು ನುಡಿ ಸಂದೇಶ -02 | Kuvempu Quotes

ಕುವೆಂಪುರವರ "ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ" ಕೃತಿಯಿಂದ: 1. ಈ ದೇಹ ದೇವರ ಗುಡಿ. ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಕೊಳಕಾದ ಗುಡ...