Sunday, 14 October 2018

೪ ಅದ್ಭುತ ಮಾತು-ಮುತ್ತುಗಳು!


ಮನಸ್ಸಿಟ್ಟು ಕಲಿತ ಅಕ್ಷರ,
ಕಷ್ಟಪಟ್ಟು ದುಡಿದು ತಿನ್ನುವ ಅನ್ನ,
ಕಷ್ಟಪಟ್ಟು ಗಳಿಸಿದ ಹಣ,
ಇಷ್ಟದಿಂದ ಮಾಡುವ ದೈವಭಕ್ತಿ,
ಯಾವತ್ತೂ ಯಾರನ್ನೂ ಕೈ ಬಿಡುವುದಿಲ್ಲ!

ಸಂತೆಯಲ್ಲಿದ್ದೂ ಏಕಾಂತತೆಯತ್ತ ಮುಖ ಮಾಡುವುದು ಸಜ್ಜನರ ಲಕ್ಷಣ!

ಯಾವುದೇ ಕಾರ್ಯವನ್ನು ಸರಿಯಾಗಿ ಆರಂಭಿಸಿದರೆ ಅರ್ಧದಷ್ಟು ಯಶಸ್ಸು ಕೈಗೊಂಡಿದಂತೆಯೇ ಸರಿ!

ಗುರಿ ಸಾಧನೆಯ ಹಾದಿಯಲ್ಲಿ ಕೆಲವಾದರೂ ಕಲ್ಲು ಬೀಳುವುದು ಸಹಜ, ಆದರೆ ಕಲ್ಲುಗಳಿಂದ ಗೋಡೆ ಕಟ್ಟಿಕೊಳ್ಳುತ್ತೇವೋ, ಸೇತುವೆ ನಿರ್ಮಿಸುತ್ತೇವೋ ಆಯ್ಕೆ ನಮ್ಮದು. ನಮ್ಮ ಬದುಕಿಗೆ ನಾವೇ ಶಿಲ್ಪಿಗಳು!

ಚುಟುಕು ಕವನಗಳು


ತಾಳಿದವನು ಬಾಳಿಯಾನು ಎಂಬುದಿದೆ
ಗಾದೆ ಮಾತೊಂದು|
ಇದನರಿತು ಸಾಗುತಿರೆ
ನಮ್ಮ ಬಾಳು ಬಂಗಾರವೆಂದು|
ಅದನರಿಯದೆ ಏಕೆ ಕೊರಗುವಿರಿ
ಜೀವನದಿ ನೊಂದು ನೊಂದು!|


ಆತುರಗಾರನಿಗೆ ಬುದ್ಧಿ ಮಟ್ಟವಂತೆ ಕೇಳ!
ನಿರಂತರ ಯತ್ನದಿ ಸಾಗಿ ನೀ ಬಾಳ!
ಸತತ ಪ್ರಯತ್ನ, ಸ್ಪಷ್ಟ ಗುರಿಯೇ ಜೀವನದ ದಾಳ!|
ಇನ್ನೇಕೆ ಚಿಂತೆ,
ಸಾಕು ಬೇಕುಗಳ ಸಂತೆ,
ಮೇಲ್ನುಡಿಗಳೇ ಸತ್ಯವಂತೆ!||
ಸುಗಮದಿ ಸಾಗಲಿ ನಿನ್ನ ಜೀವನ
ನಿಶ್ಚಿಂತೆಯಿಂ, ಸಂತೋಷದಿ ನಲಿಯಲಿ ನಿನ್ನ ಮನ,
ಅಮರ ಚೇತನವಾಗಲಿ ಜೀವಂಜ್ಯೋತಿ ಅನಿಕೇತನ!||

: ಕೃಷ್ಣ

Wednesday, 10 October 2018

ಕೆಲವು ಆಂಗ್ಲ ಪ್ರೇರಣಾತ್ಮಕ ನುಡಿಗಳು (ಆಂಗ್ಲ ಭಾಷೆಯಲ್ಲಿ )

A life without challenge would be like
going to school without lessons to learn.
Challenges come not to depress or get you down,
but to master and to grow and to unfold your abilities...

To realize the value of ONE YEAR, ask a student who failed a grade.
To realize the value of ONE MONTH, ask a mother who gave birth to a premature baby.
To realize the value of ONE WEEK, ask the editor of a weekly newspaper.
To realize the value of ONE HOUR, ask the lovers who are waiting to meet.
To realize the value of ONE MINUTE, ask a person who missed the train.
To realize the value of ONE SECOND, ask a person who just avoided an accident.
To realize the value of ONE MILLISECOND, ask the person who won a silver medal in the Olympics.

Great minds discuss Ideas;
Average minds discuss Events;
Small minds discuss People.

Tuesday, 9 October 2018

ಜ್ಞಾನಭಂಡಾರ ಜ್ಞಾನೇಶ್ವರ ಗುರುವಿಗೆ ಶರಣು.


          ಮಹಾಲಯ ಅಮಾವಾಸ್ಯೆ -2018  ಹಬ್ಬದ ದಿನ, ನನ್ನ ಪ್ರೀತಿಯ ಗುರುಗಳಾದ ಜ್ಞಾನೇಶ್ವರರ ಮನೆಗೆ ಭೇಟಿ ಕೊಟ್ಟಿದ್ದೆ. ಅದೊಂದು ಅಮೂಲ್ಯ ಸಮಯ. ಎಷ್ಟೋ ವಿಚಾರಗಳನ್ನು ಚರ್ಚಿಸಿದೆವು. ಅವುಗಳಲ್ಲಿ ಪ್ರಸ್ತುತ ಸಂದರ್ಭದಲ್ಲಿನ  ಸಾರ್ವಜನಿಕ ಸೇವೆಗೆ  ಹಾಗೂ ಜೀವನಕ್ಕೆ ಸಂಬಂಧಿಸಿದಂತೆ  ಗುರುಗಳ ಕೆಲವು ಅಭಿಪ್ರಾಯಗಗಳು ಇಂತಿವೆ.
  • ಸಮಾಜದ ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮತ್ತು ಆಡಳಿತಾಧಿಕಾರಿಗಳಿಗೆ ಕಾಳಜಿ ಮತ್ತು ಇಚ್ಛಾ ಶಕ್ತಿ  ಇರಬೇಕು. ಜೊತೆಗೆ ಹೊಸ ಚಿಂತನೆಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಧೈರ್ಯ ಇರಬೇಕು. ಪ್ರಾರಂಭಿಸುವ (Initiative) ಗುಣ ಇರಬೇಕು.
  • ಸದಾ ಅಧ್ಯಯನಶೀಲನಾಗಿರಬೇಕು, ಪ್ರತಿದಿನ ಬರೆಯುವ ಅಭ್ಯಾಸವನ್ನಿಟ್ಟುಕೊಳ್ಳಬೇಕು.
  • ಯಾವುದಕ್ಕೂ ಅಂಜಬಾರದು, ನಾವು ಸತ್ಯವಂತರು, ನೈತಿಕ  ಗುಣ ಉಳ್ಳವರು ಆಗಿದ್ದಾಗ ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ.
  • ರೈತರು ಬಹುಬೆಳೆ ಪದ್ಧತಿ ಅನುಸರಿಸುವ ಜರೂರು ಅವಶ್ಯಕತೆ ಇದೆ. ಆಗ ಮಾತ್ರ ರೈತರ ಬದುಕು ಲಾಭದಾಯಕವಾಗಲು ಸಾಧ್ಯ.

ಇವುಗಳ ಜೊತೆಗೆ ಗುರುಗಳನ್ನು ನೋಡಿ ಕಲಿಯುವುದೇ ತುಂಬಾ ಇದೆ. ಹಿತ ಮಿತ ಮೃದು ಭಾಷಿ, ಸರಳತೆ. ನೇರ ನುಡಿ, ವಿಚಾರ ಮಾಡಿ ಮಾತಾಡುವ ಕಲೆ, ಬಿಡುವಿನ ಸಮಯವನ್ನು ಓದು ಮತ್ತು ಬರಹಗಳಲ್ಲಿ ತೊಡಗಿಸಿಕೊಳ್ಳುವುದು, ಶಿಷ್ಯವರ್ಗಕ್ಕೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವುದು ಹೀಗೆ ಹಲವಾರು ವಿಷಯಗಳಿವೆ. ಹೆಸರಲ್ಲೇ ಜ್ಞಾನ ಇರುವಂತೆ ಅವರು ಜ್ಞಾನಭಂಡಾರವೆಂದರೆ ತಪ್ಪಿಲ್ಲ. ಅದನ್ನು ಸದ್ವಿನಿಯೋಗಪಡಿಸಿಕೊಂಡು ಯುವಜನತೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದೇ ವಿಚಾರಗಳನ್ನು ವಿನಿಮಯಮಾಡಿಕೊಳ್ಳುತ್ತಿರುವ ಉದ್ದೇಶವಾಗಿದೆ.

Tuesday, 31 July 2018

ಸ್ನೇಹದ ಹೂ

ಎಂದಿಗೂ ಮುಗಿಯದ
ಒಮ್ಮೆಯೂ ಬಾಡದ
ಸ್ನೇಹದ ಹೂ ನೀನು|

ನಿತ್ಯದ ಬದುಕಲಿ
ನನ್ನೆದೆ ಶಾಶ್ವತ
ಪ್ರಜ್ವಲಿಸೋ ಜ್ಯೋತಿ ನೀನು|

ಆಪತ್ಕಾಲದಿ ನೆರವು ನೀಡಿ
ಅಂಧಕಾರದಿ ದಾರಿ ತೋರಿ
ಬೆಳಗೋ ನಕ್ಷತ್ರ ನೀನು|

ಭೇದವ ಎಣಿಸದೆ
ಸ್ವಾರ್ಥವ ಬಯಸದೆ
ಬಾಳುವ ತ್ಯಾಗಮೂರ್ತಿಯು ನೀನು|

ಪದಗಳೇ ಸಾಲದ
ಕವಿತೆಗೂ ನಿಲುಕದ
ಅನಂತ ಚೇತನ ನೀನು|

 :-ಕೃಷ್ಣ (ಕೃತಿ)



Monday, 11 June 2018

ಚುಟುಕು ಕವನಗಳು


1)
ಹಗಲು ರಾತ್ರಿಗಳು ಓಡುತಿರಲು
ಸುಖ-ದುಃಖಗಳು ಸಾಗುತಿರಲು
ಕಾಲ ಚಕ್ರವು ತಿರುಗುತಿರಲು..
ಬದಲಾವಣೆ ಪ್ರಕೃತಿಯ ನಿಯಮವಣ್ಣ
ಅದುವೇ ಜಗದ ಸೂತ್ರವಣ್ಣ
ಅದನರಿತು ನೀವೆಲ್ಲರೂ ಬಾಳಿರಣ್ಣ
ನಿಮ್ಮ ಬದುಕು ಬಂಗಾರವಾಗಲಣ್ಣ



2)
ಬೇಡ ಎಂಬುದು ಬೇಕು
ಬೇಕು ಎಂಬುದು ಬಯಕೆ
ಪರಿಣಾಮ ಅಶಾಂತಿ ಮನಕೆ|
ಇನ್ನೆಷ್ಟು ದಿನ ಇದರ ಕೇಕೆ?
ಇನ್ನಾದರೂ ತುಂಬಲಿ ಸಂತೋಷ ಮಡಿಕೆ
ಹಾರಾಡಲಿ ಜೀವನ ಸಮೃದ್ಧಿಯ ಪತಾಕೆ...


                                       :- ಕೃತಿ

Wednesday, 6 June 2018

ಪ್ರಥಮ ಯೋಜನೆ: ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ (LPS Kempasagara)


ಪ್ರಥಮ ಯೋಜನೆ:ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆಂಪಸಾಗರ
ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುವ ಈ ಶಾಲೆ ತಾಲ್ಲೋಕಿಗೆ ಒಂದು ಮಾದರಿ ಶಾಲೆ. ಇಲ್ಲಿನ ಮುಖ್ಯಶಿಕ್ಷಕರು ಮತ್ತು ಸಹ ಶಿಕ್ಷಕರ ಶ್ರಮದಿಂದ ಶಾಲೆ ಹಸಿರಿನಿಂದ ಸಿಂಗರಿಸಿದ್ದು ಮಕ್ಕಳು ಜ್ಞಾನ ಲೋಕದಲ್ಲಿ ನೂರಾರು ಹೊಸ ಕನಸುಗಳೊಂದಿಗೆ ಕಂಗೊಳಿಸುತ್ತಿವೆ.
ಪ್ರಸ್ತುತ ಗ್ರಾಮದಲ್ಲಿ ಆಂಗ್ಲ ಶಾಲೆಗಳ ವ್ಯಾಮೋಹ ಜಾಸ್ತಿಯಾಗಿದ್ದು ದುಡಿದ ಬಹುಪಾಲನ್ನು ಪೋಷಕರು ಕಾನ್ವೆಂಟ್ ಶಾಲೆಗಳಿಗೆ ಸುರಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು, ಸರ್ಕಾರೀ ಆಯೋಜಿತ ಶಿಕ್ಷಣದ ಜೊತೆಗೆ -ಇಲ್ಲಿನ ಹಳೇ ವಿದ್ಯಾರ್ಥಿಗಳು, ಇತರೆ ಸ್ನೇಹ ಸಹಾಯ ಹಸ್ತಗಳು ಸೇರಿದರೆ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

ಈ ನಿಟ್ಟಿನಲ್ಲಿ ಸಹಾಯಲೋಕ-Helping hands ನಿಂದ
 ಶನಿವಾರದಂದು ಶಾಲೆಗೆ ತೆರಳಿ ಅವರಿಗೆ ಆಂಗ್ಲ ಭಾಷೆ ಕಲಿಕೆ , ವಿಜ್ಞಾನ ಅನ್ವಯಗಳ ಪರಿಚಯ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಇತರ ಆಟ ಪಾಠಗಳ ಮೂಲಕ ಗ್ರಾಮೀಣ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಳಿಲ ಸೇವೆ ಮಾಡೋಣ...
Please share your ideas to mail id: krishnakempasagara@gmail.com








ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು

ಸರ್ವರಿಗೂ ಸ್ವಾಮಿ ವಿವೇಕಾನಂದರ ದಿನಾಚರಣೆಯ /ರಾಷ್ಟ್ರೀಯ ಯುವ ದಿನದ ಶುಭಾಶಯಗಳು 💐 ಸ್ವಾಮಿ ವಿವೇಕಾನಂದರ ಪ್ರಸ್ತುತತೆಯ ಕುರಿತು ಕೆಲವು ವಿಚಾರಗಳು ನಿಮಗಾಗಿ. ಇಂದಿನ ಜಗತ...